ಬರ್‍ಬರರು

ನಗು, ನಗುತ್ತ ಬಂದರು
ನರರೂಪ ರಾಕ್ಷಸರು
ಕೇಡಾಡಿ ಸುಟ್ಟು ಹಾಕಿದರು.

ಹೈನದ ಹಸು ಮಾಡಿ
ಹಲ್ಲಲ್ಲಿ ಹೀಜುತ್ತ ಹೋದರು
ಕಡೆಗೊಮ್ಮೆ,
ಕೆಚ್ಚಲು ಖಾಲಿಯಾಗೆ,
ಕೆಟ್ಟ ಕೃಷೆಯಲ್ಲಿ ಕುರುಡಾದರು-
ನಿರಾಶಯನು
ಹಿಂಸೆಯಲಿ ತಣಿಸಿಕೊಳ್ಳತೊಡಗಿದರು.

ಹೆಣ್ಣು- ಧರಿತ್ರಿ, ಪ್ರಕೃತಿ, ಶಕ್ತಿ, ದೇವತೆ
ಹಾಗೆ ಹೀಗೆಂದು ಪೂಜಿಸುವರು
ಹೆಣ್ಣು ಗೋಳು ಗುಡಿಸಲು ರಂಗ್ಳಿಸುವರು
ನಾ ಮುಂದು ತಾ ಮುಂದು ಎನ್ನುವರು.

ಮಾಡುವುದು ಅನಾಚಾರ
ಮನೆ ಮುಂದೆ ಬೃಂದಾವನ ವೆಂದಂತೆ
ತನಗಾದರೊಂದು ಅನ್ಯರಿಗಾದರಿನ್ನೊಂದೆಂಬ
ಇಬ್ಬಂದಿ ನೀತಿಯ ಪಿಶಾಚಿಗಳು
ಎಲ್ಲಕ್ಕೂ ಒಂದೊಂದು ಶ್ಲೋಕ
ಸಿದ್ಧವಾಗಿಟ್ಟಿಹರು.

ಇದು ನೋಡಿ
ಇದು! ಈ ನೆಲದ ನ್ಯಾಯ.
ಬಾಳೆಂದರೆ
ಬರಿ ಬಂಗಾರ, ಕುರುಡು ಕಾಂಚಾಣವಲ್ಲ
ಮನಸು ಮುಖ್ಯ.
ಹೆಣ್ಣು ಹೂವು,
ಅವಳನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕು
ಸುಖ, ಸಂತಸವ ಬಾಚಿ ಸುರಿದು ಕೊಳ್ಳಬೇಕೆಂಬ
ಸರಳ ಸೂತ್ರವೇ ಗೊತ್ತಿಲ್ಲದವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳಿತಾಗಲಿ
Next post ವಿಘಟನೆ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys